Posts

ವಿತ್ತ ಕೊರತೆಯಿದ್ದರೆ ವೆಚ್ಚಕ್ಕೆ ಕಡಿವಾಣ ಹಾಕಿ!

ಪ್ರಸಕ್ತ ವಿತ್ತೀಯ ವರ್ಷದಲ್ಲಿ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಶೇ.5.6ರಷ್ಟು ವಿತ್ತೀಯ ಕೊರತೆ ಎದುರಾಗಲಿದೆ ಅಂದಿದ್ದಾರೆ ಪ್ರಧಾನಮಂತ್ರಿಯ ಆರ್ಥಿಕ ಸಲಹೆಗಾರ ಎಂ.ಗೋವಿಂದ ರಾವ್. ಅಂದರೆ ಕೇಂದ್ರ ಸರ್ಕಾರದ ಬಜೆಟಿನ ಶೇ.1ರಷ್ಟು ಹೆಚ್ಚು ಆರ್ಥಿಕ ಕೊರತೆಯನ್ನು ನಾವು ಎದುರಿಸಬೇಕಾಗುತ್ತದೆ. ಭಾರತ ಇಂದು ಆರ್ಥಿಕ ಕೊರತೆಯ ಸಂಕಷ್ಟದ ಸುಳಿಯಲ್ಲಿ ನಲುಗುತ್ತಿರುವುದು ಏಕೆಂದು ಚಿಂತಿಸುತ್ತಾ ಹೋದರೆ ಕಾರಣಗಳ ನೂರಾರು ಪುಟಗಳು ತೆರದುಕೊಳ್ಳುತ್ತವೆ. ಮೂಗಿಗಿಂತ ಮೂಗುತಿ ಭಾರ ಎಂಬ ಗಾದೆ ಮಾತು ನಮ್ಮ ವಿತ್ತೀಯ ಕೊರತೆಗೆ ಅತ್ಯುತ್ತಮವಾಗಿ ಹೊಂದಿಕೊಳ್ಳುತ್ತದೆ. ಅದು ಕೇಂದ್ರ ಸರ್ಕಾರವೇ ಇರಲಿ, ರಾಜ್ಯ ಸರ್ಕಾರಗಳೇ ಇರಲಿ, ಬಜೆಟ್ ಮಂಡಿಸುವ ಸಂದರ್ಭದಲ್ಲಿ ಅವರ ಕಣ್ಣ ಮುಂದಿರುವುದು ಓಲೈಕೆ ರಾಜಕಾರಣ. ಯಾವ ಮತದಾರನನ್ನು ಹೇಗೆ ಓಲೈಸುವುದು ಎಂಬ ಲೆಕ್ಕಾಚಾರದಲ್ಲೇ ನಮ್ಮ ವಿತ್ತ ಮಂತ್ರಿಗಳು ಬಜೆಟ್ ಸಿದ್ಧಪಡಿಸಿದರೆ ಸಿದ್ಧಗೊಳ್ಳುವ ಬಜೆಟಿನ ಗಾತ್ರ ಹಿರಿದಾಗುತ್ತಾ ಹೋಗುತ್ತದೆಯೇ ಹೊರತು ಕಿರಿದಾಗುವುದಿಲ್ಲ. ಪ್ರತಿಯೊಂದು ಸರ್ಕಾರವೂ ತನ್ನ ಮೊದಲಿನ ಸರ್ಕಾರಕ್ಕಿಂತ ದೊಡ್ಡ ಬಜೆಟ್ ಮಂಡಿಸಿದ ಕೀರ್ತಿಯನ್ನು ಪಡೆಯಬೇಕು ಎಂಬ ಭ್ರಮಾಸಾಗರದಲ್ಲಿ ತೇಲಾಡುತ್ತಿರುವುದು ಕೂಡಾ ಬಜೆಟಿನ ಗಾತ್ರ ಹಿರಿದಾಗುವುದಕ್ಕೆ ಕಾರಣವಾಗಿದೆ. ಬಜೆಟ್ ಹಿರಿದಾರೆ ಸಮಸ್ಯೆಯೇನು? ವಿವಿಧ ಯೋಜನೆಗಳನ್ನು ಸಿದ್ಧಪಡಿಸಬೇಕು ಎಂದಾದರೆ ದೊಡ್ಡ ಬಜೆಟ್ ಬೇಕಲ್ಲವೇ? ಎಂಬೆಲ್ಲ ಪ್ರಶ್ನೆಗಳು ಕಾಡಬ

ಮುತ್ತಿಗೆ ನಮಗೂ ಬೇಕೆ?: ಮುಂಬೈಗೆ ಬಂತು 'ಆಕ್ಯುಪೈ ವಾಲ್ ಸ್ಟ್ರೀಟ್' ಪ್ರತಿಭಟನೆ

'ಅಮೆರಿಕದ ಜನರು ವಾಲ್ ಸ್ಟ್ರೀಟ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಕ್ಕೆ ಹಲವಾರು ಕಾರಣಗಳಿವೆ. ಸಾಮಾನ್ಯ ಜನರಿಗೆ ವೆಚ್ಚ ಕಡಿತ ಮಾಡುವುದಕ್ಕೆ ಹೇಳಿರುವಂಥ ಸಂದರ್ಭದಲ್ಲಿ ಬ್ಯಾಂಕರ್ ಗಳಿಗೆ, ಕಾರ್ಪೊರೇಟ್ ಗಳಿಗೆ ಲಕ್ಷಾಂತರ ಡಾಲರ್ ನೆರವು ಸಿಗುತ್ತಿರುವ ಕಾರಣದಿಂದಾಗಿ ಅಮೆರಿಕ ಮತ್ತು ಐರೋಪ್ಯ ದೇಶಗಳಲ್ಲಿನ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಮೆರಿಕದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಳವಾಗುವ ಭೀತಿಯಿದೆ. ಐರೋಪ್ಯ ರಾಷ್ಟ್ರಗಳಲ್ಲಿಯೂ ಇದೇ ಆತಂಕವಿದೆ. ಈ ಪ್ರತಿಭಟನೆ ನಿಲ್ಲಬೇಕು ಮತ್ತು ಸಮಸ್ಯೆ ನಿವಾರಣೆಯಾಗಬೇಕು ಎಂದಾದರೆ ವಿಶ್ವಾಸಾರ್ಹವಾದ, ಸದೃಢವಾದ ವ್ಯವಸ್ಥೆಯೊಂದರ ಅಗತ್ಯವಿದೆ....' ಇದು ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಮೆರಿಕದಲ್ಲಿನ ಪ್ರತಿಭಟನೆಯ ಬಗ್ಗೆ ಕೊಟ್ಟಂಥ ಪ್ರತಿಕ್ರಿಯೆ. ಈ ಮಾತಿನಲ್ಲಿ ವಾಸ್ತವಾಂಶವಿದೆ  ಜೊತೆಗೆ ಒಂದು ರೀತಿಯ ನಿರ್ಲಕ್ಷ್ಯವಿದೆ. ಜನರು ವಾಲ್ ಸ್ಟ್ರೀಟ್ ಗೆ ಮುತ್ತಿಗೆ ಹಾಕಿದ್ದಾರೆ. ವಿವಿಧ ದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾರ್ಪೊರೇಟ್ ಗಳ ಮೇಲೆ, ಅವುಗಳಿಗೆ ಪ್ರೋತ್ಸಾಹ ಕೊಡುತ್ತಿರುವಂಥ ಸರಕಾರಗಳ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮುಕ್ತ ಆರ್ಥಿಕತೆಯ ವಿರುದ್ಧ ಧ್ವನಿಯೆತ್ತಿದ್ದಾರೆ. ನಿಜ, ಅಮೆರಿಕ, ಐರೋಪ್ಯ ರಾಷ್ಟ್ರಗಳಲ್ಲಿ ನಿರುದ್ಯೋಗದ ಭೀತಿಯಿದೆ. ಸಿಂಗ್ ಅವರ ಈ ಮಾತು ನಿಜ. ಆದರೆ ಭಾರತದ ದೃಷ್ಟಿಯಲ್ಲಿ ಅವರೇನೂ ಚಿಂತನೆ ನಡೆಸಿದಂತಿಲ್ಲ.

ಅಮರಿಕೊಂಡ ಅಮೆರಿಕ

ಮುಕ್ತ ಆರ್ಥಿಕತೆ ಜಗತ್ತಿನಲ್ಲಿ ಅಂಬೆಗಾಲಿಟ್ಟಾಗಲೇ ಅದರ ಬಗ್ಗೆ ವ್ಯಾಮೋಹ ಗಾಢವಾಗಿತ್ತು. ಈ ವ್ಯಾಮೋಹದ ಪರಿಣಾಮವೇ ಅದು ಏಕಾಏಕಿ ದೈತ್ಯಾಕಾರ ತಾಳಿ ಬೆಳೆಯುವಂತಾಯಿತು. ಇದೀಗ ಅದೇ ಮುಕ್ತತೆ ವಿರುದ್ಧ ಕೂಗು ಆರಂಭವಾಗಿದೆ. ವಾಲ್ ಸ್ಟ್ರೀಟ್ ಗೇ ಮುತ್ತಿಗೆ ಹಾಕುವಂಥ ಆಂದೋಲನಗಳು ವೇಗ ಪಡೆದುಕೊಳ್ಳುತ್ತಿವೆ. ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳನ್ನು ಹೋಗಲಾಡಿಸುವ ಕೂಗು ಈ ಗುಂಪಿನಿಂದ ಕೇಳಿಸುತ್ತಿದೆ. ಈ ತಿಂಗಳಲ್ಲೇ ಅಮೆರಿಕದ ಸುಮಾರು 70 ಪ್ರಮುಖ ನಗರಗಳಲ್ಲಿ ಪ್ರತಿಭಟನೆ ನಡೆದಿದೆ. ಹಾಗಿದ್ದರೆ ಮುಕ್ತ ಆರ್ಥಿಕತೆಯ ವಿರುದ್ಧ ಜನರು ಒಟ್ಟಾಗುತ್ತಿದ್ದಾರೆಯೇ? ಅದರಿಂದಾದಂಥ ಸಮಸ್ಯೆಗಳು ಏನು? ಕಾರ್ಪೊರೇಟ್ ವಲಯಗಳಿಂದ ಲಾಭ ಆಗಿಲ್ಲವೇ? ಹಿನ್ನೆಲೆ ಇಷ್ಟು: ಪ್ರಜಾಪ್ರಭುತ್ವದ ಮೇಲೆ ಕಾರ್ಪೊರೇಟ್ ವ್ಯವಸ್ಥೆ ಕೆಟ್ಟ ಪ್ರಭಾವ ಬೀರುತ್ತಿದೆ ಎಂದು ಅನಿಸತೊಡಗಿತು. ಇದರ ವಿರುದ್ಧ ಧ್ವನಿಯೆತ್ತಿದ್ದು ಕೆನಡಾ ಮೂಲದ ಅಡ್ ಬಸ್ಟರ್ಸ್ ಮೀಡಿಯಾ ಫೌಂಡೇಶನ್. ಪ್ರಜಾಪ್ರಭುತ್ವದ ಮೇಲಿನ ಕಾರ್ಪೊರೇಟ್ ಪ್ರಭಾವದ ವಿರುದ್ಧ ಹೋರಾಡುವುದಕ್ಕಾಗಿ ವಾಲ್ ಸ್ಟ್ರೀಟ್ ಗೆ ಶಾಂತಿಯುತವಾಗಿ ಮುತ್ತಿಗೆ ಹಾಕುವ ಪ್ರಸ್ತಾಪ ಮುಂದಿಟ್ಟಿತು. ಇದಕ್ಕೆ ವ್ಯಾಪಕ ಬೆಂಬಲ ಸಿಕ್ಕಿ ಇದೀಗ ವಾಲ್ ಸ್ಟ್ರೀಟ್ ಗೆ ಮುತ್ತಿಗೆ ಹಾಕುವ ಆಂದೋಲನಗಳು ನಡೆಯುತ್ತಿವೆ. 2008ರಲ್ಲಿ ಜಾಗತಿಕ ಆರ್ಥಿಕ ಮಹಾಪತನ ಎದುರಾದಾಗ ಒಂದು ಭರವಸೆ ಇತ್ತು. ಅದು- ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಗೆ ವಾಸ್ತವ ಸ

ಉದ್ದೀಪನದ ಸುಳಿಯಲ್ಲಿ ಬೀಳುವುದು ಹೀಗೆ...

Image
ಕಾಮನ್ವೆಲ್ತ್ ಮತ್ತು ಏಷ್ಯನ್ ಕ್ರೀಡಾಕೂಟದಲ್ಲಿ ಭಾರತೀಯ ಅಥ್ಲೀಟ್ ಗಳು ಹಲವಾರು ಪದಕಗಳನ್ನು ಗೆದ್ದಾಗ ದೇಶದ ಕ್ರೀಡಾ ವಲಯದಲ್ಲಿಯೇ ಸಂಭ್ರಮ. ಭಾರತೀಯ ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ಹೊಸ ಭರವಸೆಗಳು ಹುಟ್ಟಿಕೊಂಡವು ಎಂಬ ಅದಮ್ಯ ವಿಶ್ವಾಸ. ಮುಂಬರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತ ಅಮೋಘ ಸಾಧನೆ ಮಾಡುತ್ತದೆ ಎಂಬ ಕೋಟಿ ಭರವಸೆ ಎಲ್ಲರಲ್ಲೂ ಮನೆ ಮಾಡಿತ್ತು. ಆದರೆ ಈಗ ಬಂದಿರುವ ಫಲಿತಾಂಶ ಮಾತ್ರ ಇವೆಲ್ಲವನ್ನೂ ಸುಟ್ಟು ಹಾಕಿದೆ. ಅಶ್ವಿನಿ ಅಕ್ಕುಂಜಿ, ಮನ್ ದೀಪ್ ಕೌರ್, ಸಿನಿ ಜೋಸ್, ಜುವಾನಾ ಮರ್ಮು, ಟಿಯಾನಾ ಮೇರಿ ಥಾಮಸ್, ಸೋನಿಯಾ, ಹರಿಕೃಷ್ಛಮುರಳೀಧರನ್, ಪ್ರಿಯಾಂಕಾ ಪನ್ವಾರ್ ಮೊದಲಾದ ಅಥ್ಲೀಟ್ ಗಳುನಿಷೇಧಿತ ಅನಬಾಲಿಕ್ ಸ್ಟಿರಾಯಿಡ್ ಮಿಥಾಂಡಿನನ್ ಸೇವಿಸಿದ್ದು ಖಾತ್ರಿಯಾದ ಕಾರಣ ನಿಷೇಧಕ್ಕೊಳಗಾದರು. ಮೊನ್ನೆ ಮೊನ್ನೆಯಷ್ಟೇ 19 ಕಬಡ್ಡಿ ಆಟಗಾರರು ಬಿ ಸ್ಯಾಂಪಲ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ವಿಶ್ವ ಕಬಡ್ಡಿಯಲ್ಲಿ ತನ್ನ ಪ್ರಾಬಲ್ಯ ಮೆರೆದಿದ್ದ ಭಾರತೀಯ ಕಬಡ್ಡಿ ತಂಡಕ್ಕೆ ಈಗ ಅಲ್ಲಿಯೂ ಕತ್ತಲೆ! ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಆಕಾಂಕ್ಷೆ ಇಟ್ಟುಕೊಂಡಿರುವಂಥ ಹಲವಾರು ಭಾರತೀ ಕ್ರೀಡಾಳುಗಳು ಉದ್ದೀಪನ ಮದ್ದು ಸೇವನೆಯ ಸುಳಿಯಲ್ಲಿ ಸಿಲುಕುತ್ತಿದ್ದಾರೆ. ರಾಷ್ಟ್ರ ಮಟ್ಟದವರೆಗೂ ಯಾವುದೇ ಸಮಸ್ಯೆ ಎದುರಿಸದೇ ಇದ್ದವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮಸ್ಯೆಗಳ ಸರಣಿಯೇ ಎದುರಾಗುತ್ತದೆ. ತಾನು ಉದ್ದೀಪನ ಮದ್ದು ಸೇವಿ

ಜನಪ್ರಿಯತೆಯ ಅಲೆಯಲ್ಲಿ ಕೊಚ್ಚಿ ಹೋಗುತ್ತಿದೆ ವೃತ್ತಿಪರತೆ!

Image
'ಪ್ರತಿಯೊಂದು ಪಂದ್ಯವನ್ನೂ ಆಡ್ಬೇಕು, ಪ್ರತಿಯೊಂದನ್ನೂ ಗೆಲ್ಲಬೇಕು'! ಕ್ರಿಕೆಟ್ ಬಗ್ಗೆ ಭಾರತೀಯ ಪ್ರೇಕ್ಷಕನ ನಿರೀಕ್ಷೆಯಿದು. ಹಲವು ದಶಕಗಳಿಂದ ಭಾರತೀಯ ಜೀವನದ ಅವಿಭಾಜ್ಯ ಅಂಗವೋ ಎಂಬಷ್ಟು ಮಾನ್ಯತೆ ಪಡೆದಿರುವಂಥ ಕ್ರಿಕೆಟ್ ನಿಂದ ಈ ಮಟ್ಟದ ನಿರೀಕ್ಷೆ ಮಾಡಿದಲ್ಲಿ ತಪ್ಪೇನು ಎಂದು ಕ್ರಿಕೆಟ್ ಅಭಿಮಾನಿಗಳು ಪ್ರಶ್ನಿಸಬಹುದು. ಭಾರತೀಯ ಕ್ರಿಕೆಟ್ ತಂಡ ಹೆಚ್ಚು ಸಮರ್ಥ ಫಲತಾಂಶ ನೀಡಲು ಯಶಸ್ವಿಯಾಗದೇ ಇರುವುದಕ್ಕೆ ವೇಳಾಪಟ್ಟಿಯೇ ಕಾರಣ ಎಂಬುದು ಖಂಡಿತ. ಇತ್ತೀಚೆಗಿನ ಇಂಗ್ಲೆಂಡ್ ಪ್ರವಾಸದ ಸಂದರ್ಭದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಒಂದು ಟೆಸ್ಟ್, ಏಕದಿನ ಮತ್ತು ಟಿ20 ಸರಣಿ ಗಳನ್ನು ಆಡಿತು. ಅದಾದ ಕೆಲವೇ ದಿನಗಳಲ್ಲಿ ಶುರುವಾಯಿತು ಛಾಂಪಿಯನ್ಸ್ ಲೀಗ್. ಈ ಲೀಗ್ ಮುಗಿಯುವುದೇ ತಡ ಮತ್ತೆ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಏಕದಿನ ಸರಣಿ! ಈ ಸರಣಿಗಳ ನಡುವೆ ಬಿಡುವೆಲ್ಲಿದೆ ಸ್ವಾಮಿ? ಬಿಡುವಿಲ್ಲದ ದಿನಚರಿಯ ಹಿನ್ನೆಲೆಯಲ್ಲಿ ಜನರು ಟಿ20 ಪಂದ್ಯಗಳನ್ನು ಇಷ್ಟಪಡುತ್ತಾರೆ ನಿಜ. ಇಂದು ಟಿ20 ಪಂದ್ಯಗಳೇ ಹೆಚ್ಚಾಗಿವೆ ಎಂದರೆ ಅದಕ್ಕೆ ಮುಖ್ಯವಾದ ಕಾರಣ ಅದರಿಂದ ಬರುವ ಹಣ! ಟಿ20 ಪಂದ್ಯಗಳ ಆಯೋಜನೆಯಿಂದ ಎಷ್ಟು ಹಣ ಬರಬಹುದು ಎಂಬ ಆಲೋಚನೆ ಬಿಸಿಸಿಐ ಮನಸ್ಸಿನಲ್ಲಿದ್ದರೆ, ಇವುಗಳಿಂದ ತಾವೆಷ್ಟು ಹಣ ಸಂಪಾದನೆ ಮಾಡಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ ಆಟಗಾರರು. ಟಿ20 ಪಂದ್ಯಗಳಿಂದ ಹಣ ಬರುತ್ತೆ, ಅಂತಾರಾಷ್ಟ್ರೀಯ ಪಂದ್ಯಗ

ಬದಲಾಗುತ್ತಿದೆ ಕೆಎಎಸ್ ಪಠ್ಯ- ಎದುರಿಸೋದಕ್ಕೆ ನೀವೆಷ್ಟು ಸಿದ್ಧ?

Image
ಕರ್ನಾಟಕ ಆಡಳಿತಾತ್ಮಕ ಸೇವಾ(ಕೆಎಎಸ್) ಪರೀಕ್ಷೆಯ ಪಠ್ಯ ಬದಲಾಗುತ್ತಿದೆ. ಅಂದರೆ ಅದು ಭಾರತೀಯ ಆಡಳಿತಾತ್ಮಕ ಸೇವಾ (ಐಎಎಸ್) ಪರಿಕ್ಷೆಯ ಮಟ್ಟಕ್ಕೆ ಬರುತ್ತಿದೆ. ಆದರೆ ಐಎಎಸ್, ಕೆಎಎಸ್... ಮುಂತಾದಕ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಹೆಚ್ಚಿನವರಲ್ಲಿ ಅಳುಕಿದೆ. ಹೇಗೆ ಎದುರಿಸುವುದು ಎಂಬ ಗೊಂದಲದಲ್ಲಿದೆ ಯುವ ಸಮಾಜ.        ಇಂತಿರುವಾಗ ಕೆಎಎಸ್ ಕೂಡಾ ಐಎಎಸ್ ಮಟ್ಟದ ಪಠ್ಯ ಹೊಂದಿದರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ನಿರ್ಧರಿಸುವ ಅಭ್ಯರ್ಥಿಗಳು ಯಾವ ರೀತಿಯ ಸಿದ್ಧತೆ ನಡೆಸಬೇಕು? ಸ್ಪರ್ಧಾತ್ಮಕ ಪರೀಕ್ಷೆಗಳ ಬಗೆಗಿನ ಅಳುಕನ್ನು ಅಭ್ಯರ್ಥಿಗಳ ಮನಸ್ಸಿನಿಂದ ತೆಗೆದು ಹಾಕುವ ಬಗೆ ಹೇಗೆ? ಇವೇ ಮುಂತಾದ ವಿಚಾರಗಳ ಬಗ್ಗೆ ಬೆಂಗಳೂರಿನ ವಿಜಯನಗರದ ಎಂ ಸಿ ಬಡಾವಣೆಯಲ್ಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರತಿಷ್ಠಿತ ತರಬೇತಿ ಕೇಂದ್ರ ಆಸ್ಪೈರ್ ಸ್ಟಡಿ ಸೆಂಟರ್ನ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್ ದಡ್ಡೆ ಅವರನ್ನು `ಕನ್ನಡಪ್ರಭ' ಮಾತಾಡಿಸಿತು. ಶಿವಶಂಕರ್ ದಡ್ಡೆ  - ಕೆಎಎಸ್ ಪಠ್ಯ ಯಾವಾಗಿಂದ ಬದಲಾಗುತ್ತಿದೆ? ಮುಂದಿನ ನೋಟಿಫಿಕೇಶನ್, ಅಂದರೆ ಪ್ರಿಲಿಮಿನರಿ ಪರೀಕ್ಷೆಗೆ ಸೇರ್ಪಡೆಯಾಗುವ ಮುಂದಿನ ಬ್ಯಾಚ್ನ ಅಭ್ಯರ್ಥಿಗಳಿಗೆ ಹೊಸ ಪಠ್ಯ ಇರುವ ಸಾಧ್ಯತೆಗಳಿವೆ. ಈಗಾಗಲೇ ಹೊಸ ಪಠ್ಯ ಸಿದ್ಧವಾಗಿದೆ. ಆ ಪಠ್ಯ ಜಾರಿಯಾಗುವುದಷ್ಟೇ ಬಾಕಿ. ಸುಮಾರು 200 ಹುದ್ದೆಗಳಿಗೆ ಸರಕಾರ ಈಗಾಗಲೇ ಅನುಮತಿ ಕೊಟ್ಟಿದೆ. ಈ ತಿಂಗಳ ಕೊನೆಯಲ್ಲಿ ಅಥವಾ ಮುಂ

ಉದ್ದೇಶವೊಂದೇ ಸಾಲದು, ಸಾಧನೆಯೂ ಜೊತೆಗೂಡಬೇಕು

Image
ಸರಿಯಾಗಿ ಒಂದು ವರ್ಷವಾಗಿತ್ತು ಚೀನಾ ಮತ್ತು ಭಾರತದ ನಡುವಿನ ರಾಜತಾಂತ್ರಿಕ ಸಂಬಂಧ ಕಡಿತಗೊಂಡು. ಈ ಸಂಬಂಧವನ್ನು ಮತ್ತೆ ಸುಧಾರಿಸಿಕೊಳ್ಳಬೇಕು, ಎರಡೂ ದೇಶಗಳ ನಡುವೆ ಮತ್ತೆ ಉತ್ತಮ ಸಂಬಂಧ ಬೆಸೆದುಕೊಳ್ಳಬೇಕು ಎಂಬ ಪ್ರಯತ್ನಗಳು ಸತತವಾಗಿ ನಡೆದಿದ್ದವು. ಇದು ಸಕಾರಕ್ಕೆ ಬರುವ ಪ್ರಯತ್ನ ನಡೆದದ್ದು ಭಾರತೀಯ ರಕ್ಷಣಾ ಇಲಾಖೆಯಿಂದ. ಕೆಲವು ದಿನಗಳ ಹಿಂದೆ ಮೇಜರ್ ಜನರಲ್ ಗುರ್ ಮೀತ್ ಸಿಂಗ್ ನೇತೃತ್ವದ ರಕ್ಷಣಾ ಇಲಾಖೆಯ ಎಂಟು ಮಂದಿ ಸದಸ್ಯರನ್ನೊಳಗೊಂಡ ನಿಯೋಗವು ಚೀನಾಕ್ಕೆ ತೆರಳಿತ್ತು. ಮಿಲಿಟರಿ ಒಪ್ಪಂದಗಳನ್ನು ಮಾಡಿಕೊಳ್ಳುವುದು ಈ ಭೇಟಿಯ ಉದ್ದೇಶ. ಸತತ ಒಂದು ವಾರದ ಮಾತುಕತೆ. ಚೀನಾದ ವಿವಿಧ ನಗರಗಳಿಗೆ ಭೇಟಿ ಕೊಟ್ಟು ಅಲ್ಲಿನ ಅಭಿವೃದ್ಧಿ ಮತ್ತು ಮಿಲಿಟರಿ ವಿಚಾರಗಳನ್ನು ಅಧ್ಯಯನ ಮಾಡಿತು. ಚೀನಾದ ಮಿಲಿಟರಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿತು. ಅಷ್ಟೇ ಸಾಕೆ? ಫಲ ಬೇಡವೇ? ಚೀನಾ ಭೇಟಿ ಫಲಪ್ರದವಾಗಿದೆ ಎಂದು ಚೀನಾದಿಂದ ವಾಪಸಾದ ಭಾರತೀಯ ನಿಯೋಗವೇನೋ ಹೇಳಿತ್ತು. ಆದರೆ ಸಂಪೂರ್ಣ ಮಾಹಿತಿಯನ್ನು, ಒಪ್ಪಂದದ ವಿವರಗಳನ್ನು ಕೊಟ್ಟಿರಲಿಲ್ಲ. ಜೂನ್ 29ರಂದು ಇದಕ್ಕೆ ತೆರೆ ಎಳೆಯುವಂತೆ ಚೀನಾ 'ಮಿಲಿಟರಿ ಒಪ್ಪಂದದ ಬಗ್ಗೆ ಮಾತುಕತೆಗಳು ನಡೆದದ್ದೇನೋ ನಿಜ. ಆದರೆ ಒಪ್ಪಂದ ಪೂರ್ಣಗೊಳ್ಳಲು ಎರಡೂ ಕಡೆಯಿಂದ ಹಲವಾರು ಅಡೆತಡೆಗಳಿವೆ. ಸಮಸ್ಯೆಗಳಿವೆ' ಎಂದಿತು. ಎರಡೂ ದೇಶಗಳು ಜೊತೆಗೂಡಿ ಕೆಲಸ ಮಾಡುವ ಮನಸ್ಥಿತಿಯನ್ನು ಪ್ರದರ್ಶಿಸಿದವು ನಿಜ. ಆದರೆ ಹ