ಉದ್ದೀಪನದ ಸುಳಿಯಲ್ಲಿ ಬೀಳುವುದು ಹೀಗೆ...
ಕಾಮನ್ವೆಲ್ತ್ ಮತ್ತು ಏಷ್ಯನ್ ಕ್ರೀಡಾಕೂಟದಲ್ಲಿ ಭಾರತೀಯ ಅಥ್ಲೀಟ್ ಗಳು ಹಲವಾರು ಪದಕಗಳನ್ನು ಗೆದ್ದಾಗ ದೇಶದ ಕ್ರೀಡಾ ವಲಯದಲ್ಲಿಯೇ ಸಂಭ್ರಮ. ಭಾರತೀಯ ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ಹೊಸ ಭರವಸೆಗಳು ಹುಟ್ಟಿಕೊಂಡವು ಎಂಬ ಅದಮ್ಯ ವಿಶ್ವಾಸ. ಮುಂಬರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತ ಅಮೋಘ ಸಾಧನೆ ಮಾಡುತ್ತದೆ ಎಂಬ ಕೋಟಿ ಭರವಸೆ ಎಲ್ಲರಲ್ಲೂ ಮನೆ ಮಾಡಿತ್ತು. ಆದರೆ ಈಗ ಬಂದಿರುವ ಫಲಿತಾಂಶ ಮಾತ್ರ ಇವೆಲ್ಲವನ್ನೂ ಸುಟ್ಟು ಹಾಕಿದೆ. ಅಶ್ವಿನಿ ಅಕ್ಕುಂಜಿ, ಮನ್ ದೀಪ್ ಕೌರ್, ಸಿನಿ ಜೋಸ್, ಜುವಾನಾ ಮರ್ಮು, ಟಿಯಾನಾ ಮೇರಿ ಥಾಮಸ್, ಸೋನಿಯಾ, ಹರಿಕೃಷ್ಛಮುರಳೀಧರನ್, ಪ್ರಿಯಾಂಕಾ ಪನ್ವಾರ್ ಮೊದಲಾದ ಅಥ್ಲೀಟ್ ಗಳುನಿಷೇಧಿತ ಅನಬಾಲಿಕ್ ಸ್ಟಿರಾಯಿಡ್ ಮಿಥಾಂಡಿನನ್ ಸೇವಿಸಿದ್ದು ಖಾತ್ರಿಯಾದ ಕಾರಣ ನಿಷೇಧಕ್ಕೊಳಗಾದರು. ಮೊನ್ನೆ ಮೊನ್ನೆಯಷ್ಟೇ 19 ಕಬಡ್ಡಿ ಆಟಗಾರರು ಬಿ ಸ್ಯಾಂಪಲ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ವಿಶ್ವ ಕಬಡ್ಡಿಯಲ್ಲಿ ತನ್ನ ಪ್ರಾಬಲ್ಯ ಮೆರೆದಿದ್ದ ಭಾರತೀಯ ಕಬಡ್ಡಿ ತಂಡಕ್ಕೆ ಈಗ ಅಲ್ಲಿಯೂ ಕತ್ತಲೆ! ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಆಕಾಂಕ್ಷೆ ಇಟ್ಟುಕೊಂಡಿರುವಂಥ ಹಲವಾರು ಭಾರತೀ ಕ್ರೀಡಾಳುಗಳು ಉದ್ದೀಪನ ಮದ್ದು ಸೇವನೆಯ ಸುಳಿಯಲ್ಲಿ ಸಿಲುಕುತ್ತಿದ್ದಾರೆ. ರಾಷ್ಟ್ರ ಮಟ್ಟದವರೆಗೂ ಯಾವುದೇ ಸಮಸ್ಯೆ ಎದುರಿಸದೇ ಇದ್ದವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮಸ್ಯೆಗಳ ಸರಣಿಯೇ ಎದುರಾಗುತ್ತದೆ. ತಾನು ಉದ್ದೀಪನ ಮದ್ದು ಸೇವಿ