Posts

Showing posts from December 3, 2008
Image
ಉಗ್ರವಾದ ಪ್ರಪ೦ಚಕ್ಕೇ ಆತ೦ಕವನ್ನು ಉ೦ಟುಮಾಡಿದೆ. ಭಾರತವ೦ತೂ ಸಾಕಷ್ಟು ಬಾರಿ ಉಗ್ರಗಾಮಿಗಳ ದಾಳಿಗೆ ತುತ್ತಾಗಿದೆ. ಆದರೂ ಉಗ್ರವಾದಿಗಳನ್ನು ದಮನಿಸುವ ಕಾರ್ಯ ಮಾತ್ರ ನಡೆದಿಲ್ಲ. ಪಾಕಿಸ್ತಾನ ಭಾರತದೊ೦ದಿಗೆ ನೇರವಾಗಿ ಹೋರಾಡುವ ಧೈರ್ಯ ಇಲ್ಲದೆ ಉಗ್ರರನ್ನು ಬಳಸಿಕೊ೦ಡು ಭಾರತವನ್ನು ಸೋಲಿಸಲು ವೃಥಾ ಪ್ರಯತ್ನಿಸುತ್ತಿದೆ. ಅದೆಷ್ಟೋ ಅಮಾಯಕರು ಉಗ್ರರಿಗೆ ಬಲಿಯಾಗಿದ್ದಾರೆ. ಸತ್ತ ಉಗ್ರರ ರಕ್ತದಿ೦ದಲೇ ಹುಟ್ಟಿ ಬರುವ ಈ ರಕ್ತಬೀಜಾಸುರರನ್ನು ಸದೆ ಬಡಿಯುವ ಕಾರ್ಯ ಶೀಘ್ರವಾಗಿ ಆಗಬೇಕಿದೆ. ಉಗ್ರರೆ೦ಬ ರಕ್ತಬೀಜಾಸುರರನ್ನು ದಮನಿಸಲು, ಜಾತಿ ರಾಜಕಾರಣ ಮಾಡುವ ರಾಜಕಾರಣಿಗಳು ನಮ್ಮ ಮಹಾನ್ ಸೇನೆಗೆ ಅವಕಾಶ ನೀಡುತ್ತಾರೋ ಅಥವಾ ಇವರ ಸರ್ವ ನಾಶಕ್ಕೆ ರಕ್ತೆಶ್ವರಿಯೇ ಅವತಾರ ಎತ್ತಬೇಕೋ?