Posts

Showing posts from June 11, 2011

ಹ್ಯಾಕರ್ಸ್, ಉಗ್ರರ ಮಧ್ಯೆ ಉದಾಸ 'ಶಾಂತಿದೂತ'!

Image
ಅದ್ಯಾಕೋ 1962ರಲ್ಲಿ ನಮ್ಮ ಸರ್ಕಾರ ಮಾಡಿದಂಥ ಮೂರ್ಖತನ ಮತ್ತೆ ಮತ್ತೆ ಕಾಡುತ್ತಿದೆ. ಚೀನೀ ಸೈನಿಕರು ಟಿಬೆಟ್ ಗೆ ಬಂದು ಕುಳಿತಿದ್ದಾರೆ, ಸೇನಾ ನೆಲೆಗಳನ್ನು ಸ್ಥಾಪಿಸುತ್ತಿದ್ದಾರೆ, ರಸ್ತೆಗಳು ಮತ್ತಿತರ ಮೂಲಸೌಕರ್ಯಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ ಎಂಬುದು ಗೊತ್ತಾದಾಗಲೂ ಸಹ ಅಂದಿನ ಪ್ರಧಾನಿ ಜವಹರಲಾಲ್ ನೆಹರು ಮತ್ತವರ ಸಚಿವ ಸಂಪುಟದ ಸದಸ್ಯರು, ಮಿಲಿಟರಿ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ಮಾಡುತ್ತಲೇ ಬಂದಿದ್ದರು. ಏಕಾಏಕಿ ಚೀನಾ ದಾಳಿಯಿಟ್ಟಾಗ ನೆಹರು ಹೇಳಿಕೆಗಳನ್ನು ನಂಬಿದ್ದ ದೇಶದ ಜನತೆ ತಲ್ಲಣಗೊಂಡಿದ್ದರು. ಆ ಯುದ್ಧದಲ್ಲಿ ಹೀನಾಯ ಸೋಲನುಭವಿಸಬೇಕಾಗಿ ಬಂದದ್ದು, ನಮ್ಮ ಅನೇಕ ಸೈನಿಕರು ಚೀನೀಯರಿಗೆ ಸೆರೆ ಸಿಕ್ಕಬೇಕಾಗಿ ಬಂದದ್ದು ಎಲ್ಲ ಘಟನೆಗಳೂ ಈಗಲೂ ಕಣ್ಣಮುಂದೆಯೇ ನಡೆಯುತ್ತಿರುವಂತೆ ಧುತ್ತನೆ ಪ್ರತ್ಯಕ್ಷವಾಗುತ್ತವೆ. 'ಹಿಂದಿ, ಚೀನೀ ಭಾಯಿ ಭಾಯಿ' ಎಂದು ಹೇಳುತ್ತಾ ಬಗಲಲ್ಲೇ ನಿಂತುಕೊಂಡು ಗುಂಡಿನ ಮಳೆಗರೆದ ಚೀನಾವನ್ನು ಓಲೈಸುವುದಕ್ಕೆ ನಮ್ಮ ನಾಯಕರು ಈಗಲೂ ಪ್ರಯತ್ನ ಪಡುತ್ತಿದ್ದಾರೆ. ಚಿತ್ರ: ಸಂತೋಷ್ ಸಸಿಹಿತ್ಲು ಬ್ರಿಟಿಷರು ಬಿತ್ತಿದಂತಹ ಸೇಡಿನ ಬೀಜವನ್ನು ಹೆಮ್ಮರವಾಗಿ ಬೆಳೆಸಿಕೊಂಡಿರುವಂಥ ಪಾಕಿಸ್ತಾನದ್ದೂ ಇದೇ ಕಥೆ. ತನ್ನ ಸೈನಿಕರನ್ನು, ಐಎಸ್ ಐ ಏಜೆಂಟರನ್ನು ಭಾರತದೊಳಕ್ಕೆ ನುಗ್ಗಿಸಿ ಅವಾಂತರ ಸೃಷ್ಟಿಸುತ್ತಿರುವ ಪಾಕಿಸ್ತಾನದ ಬಗ್ಗೆ ನಾವು ತಳೆದಿರುವ ಮೃದು ಭಾವ ಎದೆಯಾಳಕ್ಕೆ ಭರ್ಜಿಯಿಂದ ಚುಚ್ಚಿ