Posts

Showing posts from March 30, 2009

ಅಮೂಲ್ಯ....

Image
ಮಾನವ ಕಂಡ ಕಂಡಲ್ಲಿ ಭೂಮಿಗೆ ತೂತು ಕೊರೆದು ನೀರಿನ ನಿಕ್ಷೆಪಗಳನ್ನೇ ನಾಶ ಮಾಡುತ್ತಿದ್ದಾನೆ. ಮತ್ತೊಂದೆಡೆ ಕಾಡುಗಳನ್ನು ಕಡಿದು ಮಳೆ ಕಡಿಮೆಯಾಗುವಂತೆ ಮಾಡಿದ್ದಾನೆ. ನೀರು ಇಂಗಿ ಅಂತರ್ಜಲ ಹೆಚ್ಚುವುದೂ ನಿಂತು ಹೋಗಿದೆ. ತೀವ್ರ ಬಾಯಾರಿದ ಕಾಗೆ ನಲ್ಲಿಯಲ್ಲಿ ನೀರು ಬರುವುದೇ ಎಂದು ಆಸೆಯಿಂದ ನೋಡುತ್ತಿದೆ. ನೀರು ಎಷ್ಟು ಅಮೂಲ್ಯ ಎಂಬುದನ್ನು ಈ ಕಾಗೆ ಮನುಷ್ಯರಿಗೆ ಹೇಳಿ ಕೊಡುತ್ತಿದೆಯೇ?

ಗೌಡ್ರು ಯಾಕ್ ಹಿಂಗೆ ಕುಂತವ್ರೆ .....

Image
ಬೆಳಗಾವಿಯಲ್ಲಿ ನಡೆದ ಜೆ. ಡಿ. ಎಸ್ ಸಮಾವೇಶದಲ್ಲಿ ದೇವೇ ಗೌಡ್ರು ಕಾಂಗ್ರೆಸ್ , ಬಿಜೆಪಿ ಯನ್ನು ಹೇಗೆ ಮಟ್ಟ ಹಾಕಲಿ ಎಂದು ಯೋಚನಾ ಮಗ್ನರಾಗಿ ಕುಳಿತ ಪರಿ ಇದು. ಅಥವಾ ಜೋರು ನಿದ್ದೆ ತೂಕಡಿಸಿ ಹಿಂಗ್ ಕುಂತರೋ ? ಯಾರಿಗ್ ಗೊತ್ತು?

ಜ್ಞಾನೋದಯ (?)

Image
ಒಂದು ಕಾಲ ಇತ್ತು. ಭಾರತದಲ್ಲಿನ ಮಹಾನುಭಾವರು (?) ಅಮೆರಿಕದಲ್ಲಿ ಉದ್ಯೋಗ ಸಂಪಾದಿಸಿದರೆ ತಮ್ಮಷ್ಟು ಪ್ರಖಾಂಡ ಬುದ್ಧಿವಂತರು ಯಾರೂ ಇಲ್ಲ ಎಂದು ಭಾವಿಸಿದ್ದರು. ಈಗ ಕಾಲ ಬದಲಾಗಿದೆ. ಆರ್ಥಿಕ ಕುಸಿತ ಇಡೀ ಅಮೇರಿಕೆಯನ್ನು ನಡುಗಿಸಿದೆ. ಲಕ್ಷಾಂತರ ಮಂದಿ ನೌಕರಿ ಕಳೆದುಕೊಂಡಿದ್ದಾರೆ. ಕೇವಲ ಐಟಿ ಕಂಪನಿಗಳು ಮಾತ್ರವಲ್ಲ, ಕಾನೂನು ಪರಿಣತರು ಕೂಡಾ ಪಿಂಕ್ ಸ್ಲಿಪ್ ಪಡೆದಿದ್ದಾರೆ. ಕಳೆದ ೨ ತಿಂಗಳಲ್ಲಿ ೫೦೦೦ ಕಾನೂನು ಪರಿಣತರು ನಿರುದ್ಯೋಗಿಗಳಾಗಿದ್ದಾರೆ ವಿಶೇಷ ಎಂದರೆ ಇವರೆಲ್ಲರ ಕಣ್ಣು ಈಗ ಭಾರತದ ಮೇಲೆ ಬಿದ್ದಿರುವುದು. ಭಾರತದಲ್ಲಿ ಕಾನೂನು ಪರಿಣತರ ಅಗತ್ಯ ಬಹಳವಾಗಿದ್ದು ಇವರಲ್ಲಿ ಆಶಾ ಭಾವ ಮೂಡಿಸಿದೆ. ಇದರಲ್ಲಿ ಅಚ್ಚರಿ ಪದಬೇಕಾದ್ದಿಲ್ಲ ಆದರೆ ಅಮೇರಿಕಾ ಎಂದರೆ ಜೊಲ್ಲು ಸುರಿಸುತ್ತಿದ್ದ ಭಾರತೀಯರು ಸ್ವಲ್ಪ ಯೋಚಿಸಬೇಕಾಗಿದೆ. ಅಮೆರಿಕದಲ್ಲಿ ನೌಕರಿ ಹಿಡಿದಿದ್ದ ಹೆಚ್ಚಿನ ಭಾರತೀಯರು ಕೂಡ ತವರಿಗೆ ವಾಪಸಗುತ್ತಿದ್ದರೆ. ಬಹುಷಃ ತಾಯ್ನಾಡಿನ ಪ್ರಾಮುಖ್ಯತೆ ಇವರಿಗೆ ಈಗ ಅರ್ಥ ಆಗಿದೆ ಎಂದು ಕಾಣುತ್ತದೆ. ಏನಂತೀರಿ?