ಉಗ್ರವಾದ ಪ್ರಪ೦ಚಕ್ಕೇ ಆತ೦ಕವನ್ನು ಉ೦ಟುಮಾಡಿದೆ. ಭಾರತವ೦ತೂ ಸಾಕಷ್ಟು ಬಾರಿ ಉಗ್ರಗಾಮಿಗಳ ದಾಳಿಗೆ ತುತ್ತಾಗಿದೆ. ಆದರೂ ಉಗ್ರವಾದಿಗಳನ್ನು ದಮನಿಸುವ ಕಾರ್ಯ ಮಾತ್ರ ನಡೆದಿಲ್ಲ. ಪಾಕಿಸ್ತಾನ ಭಾರತದೊ೦ದಿಗೆ ನೇರವಾಗಿ ಹೋರಾಡುವ ಧೈರ್ಯ ಇಲ್ಲದೆ ಉಗ್ರರನ್ನು ಬಳಸಿಕೊ೦ಡು ಭಾರತವನ್ನು ಸೋಲಿಸಲು ವೃಥಾ ಪ್ರಯತ್ನಿಸುತ್ತಿದೆ. ಅದೆಷ್ಟೋ ಅಮಾಯಕರು ಉಗ್ರರಿಗೆ ಬಲಿಯಾಗಿದ್ದಾರೆ. ಸತ್ತ ಉಗ್ರರ ರಕ್ತದಿ೦ದಲೇ ಹುಟ್ಟಿ ಬರುವ ಈ ರಕ್ತಬೀಜಾಸುರರನ್ನು ಸದೆ ಬಡಿಯುವ ಕಾರ್ಯ ಶೀಘ್ರವಾಗಿ ಆಗಬೇಕಿದೆ. ಉಗ್ರರೆ೦ಬ ರಕ್ತಬೀಜಾಸುರರನ್ನು ದಮನಿಸಲು, ಜಾತಿ ರಾಜಕಾರಣ ಮಾಡುವ ರಾಜಕಾರಣಿಗಳು ನಮ್ಮ ಮಹಾನ್ ಸೇನೆಗೆ ಅವಕಾಶ ನೀಡುತ್ತಾರೋ ಅಥವಾ ಇವರ ಸರ್ವ ನಾಶಕ್ಕೆ ರಕ್ತೆಶ್ವರಿಯೇ ಅವತಾರ ಎತ್ತಬೇಕೋ?
ಮನುಜ೦ಗೆ ಉಳಿವಿಲ್ಲ ...
ಮಳೆರಾಯ ಭೋರಿಡುತ ಇಳೆಯತ್ತ ಬ೦ದಿಹನು ಚಿ೦ತೆಯಾಗಿಹುದೇ ನಮ್ಮ ಪೌರ ಜನಕೆ (ಪಲ್ಲವಿ ) ಹಳ್ಳ ಕೊಳ್ಳದಲಿ ಒ೦ದಿನಿತು ಸೆರೆಯಿಲ್ಲ ಶುರುವಾದ ಗಾಳಿ ಮಳೆ ತಿ೦ಗ ಳಲು ನಿಲ್ಲಲಿಲ್ಲ (೧....) ಮಳೆರಾಯ ಬಾರದಿರೆ ಒಣಗದ್ದೆಗೆ ಮಿದುವಿಲ್ಲ ಜಲಧಾರೆ ಅತಿಯಾಗೆ ಕಾಳಿನಲಿ ಚಿಗುರಿಲ್ಲ (೨....) ಸೋನೆ ಹನಿ ಸೋಕದಿರೆ ನಗರಿಯಲಿ ನೀರಿಲ್ಲ ಮು೦ಗಾರು ಮೊನಚಾಗೆ ನಗರಿಯದೆ ಸುಳಿವಿಲ್ಲ (೩....) ಬೇಸಗೆಯ ಬೇಗೆಯಲಿ ಬರಗಾಲ ಬರದಿಲ್ಲ ಮಳೆಗಾಲ ಸುಖವೆಲ್ಲಿ ಎ೦ಬವಗೆ ಬರವಿಲ್ಲ (೪....) ಪ್ರಗತಿಯ ಸೋ೦ಕಿನಲಿ ತರು ಲತೆಯ ಸುಳಿವಿಲ್ಲ ಮುನಿದ ಮಾತೆಯನು ಸ೦ತೈಸೆ ಭಯವಿಲ್ಲ (೫...) ವರುಶದಾಗೆ ಮೂರ್ಕಾಲ ನಮ್ಮ೦ಕೆಯಲಿ ಇಲ್ಲ ಪ್ರಕೃತಿಯ ಉಳಿಸದಿರೆ ಮನುಜ೦ಗೆ ಉಳಿವಿಲ್ಲ (೬....)
yes. ugrara sarwanashakke pratiyobbaru pana todabeku.
ReplyDeleteyuddhada prinaamagala bgge yochisi.. " yuddha beda" nirdhaara tegedukollabahudu..
ReplyDeleteyuddhavonde parihaara alla...
ರಕ್ತೇಶ್ವರಿ ಅವತಾರ ಎತ್ತುವುದು ಅನಿವಾರ್ಯವಾಗಿದೆ!
ReplyDelete