ಬೆಳಗಾವಿಯಲ್ಲಿ ನಡೆದ ಜೆ.ಡಿ. ಎಸ್ ಸಮಾವೇಶದಲ್ಲಿ ದೇವೇ ಗೌಡ್ರು ಕಾಂಗ್ರೆಸ್ , ಬಿಜೆಪಿ ಯನ್ನು ಹೇಗೆ ಮಟ್ಟ ಹಾಕಲಿ ಎಂದು ಯೋಚನಾ ಮಗ್ನರಾಗಿ ಕುಳಿತ ಪರಿ ಇದು. ಅಥವಾ ಜೋರು ನಿದ್ದೆ ತೂಕಡಿಸಿ ಹಿಂಗ್ ಕುಂತರೋ ? ಯಾರಿಗ್ ಗೊತ್ತು?
'ಅಮೆರಿಕದ ಜನರು ವಾಲ್ ಸ್ಟ್ರೀಟ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಕ್ಕೆ ಹಲವಾರು ಕಾರಣಗಳಿವೆ. ಸಾಮಾನ್ಯ ಜನರಿಗೆ ವೆಚ್ಚ ಕಡಿತ ಮಾಡುವುದಕ್ಕೆ ಹೇಳಿರುವಂಥ ಸಂದರ್ಭದಲ್ಲಿ ಬ್ಯಾಂಕರ್ ಗಳಿಗೆ, ಕಾರ್ಪೊರೇಟ್ ಗಳಿಗೆ ಲಕ್ಷಾಂತರ ಡಾಲರ್ ನೆರವು ಸಿಗುತ್ತಿರುವ ಕಾರಣದಿಂದಾಗಿ ಅಮೆರಿಕ ಮತ್ತು ಐರೋಪ್ಯ ದೇಶಗಳಲ್ಲಿನ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಮೆರಿಕದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಳವಾಗುವ ಭೀತಿಯಿದೆ. ಐರೋಪ್ಯ ರಾಷ್ಟ್ರಗಳಲ್ಲಿಯೂ ಇದೇ ಆತಂಕವಿದೆ. ಈ ಪ್ರತಿಭಟನೆ ನಿಲ್ಲಬೇಕು ಮತ್ತು ಸಮಸ್ಯೆ ನಿವಾರಣೆಯಾಗಬೇಕು ಎಂದಾದರೆ ವಿಶ್ವಾಸಾರ್ಹವಾದ, ಸದೃಢವಾದ ವ್ಯವಸ್ಥೆಯೊಂದರ ಅಗತ್ಯವಿದೆ....' ಇದು ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಮೆರಿಕದಲ್ಲಿನ ಪ್ರತಿಭಟನೆಯ ಬಗ್ಗೆ ಕೊಟ್ಟಂಥ ಪ್ರತಿಕ್ರಿಯೆ. ಈ ಮಾತಿನಲ್ಲಿ ವಾಸ್ತವಾಂಶವಿದೆ ಜೊತೆಗೆ ಒಂದು ರೀತಿಯ ನಿರ್ಲಕ್ಷ್ಯವಿದೆ. ಜನರು ವಾಲ್ ಸ್ಟ್ರೀಟ್ ಗೆ ಮುತ್ತಿಗೆ ಹಾಕಿದ್ದಾರೆ. ವಿವಿಧ ದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾರ್ಪೊರೇಟ್ ಗಳ ಮೇಲೆ, ಅವುಗಳಿಗೆ ಪ್ರೋತ್ಸಾಹ ಕೊಡುತ್ತಿರುವಂಥ ಸರಕಾರಗಳ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮುಕ್ತ ಆರ್ಥಿಕತೆಯ ವಿರುದ್ಧ ಧ್ವನಿಯೆತ್ತಿದ್ದಾರೆ. ನಿಜ, ಅಮೆರಿಕ, ಐರೋಪ್ಯ ರಾಷ್ಟ್ರಗಳಲ್ಲಿ ನಿರುದ್ಯೋಗದ ಭೀತಿಯಿದೆ. ಸಿಂಗ್ ಅವರ ಈ ಮಾತು ನಿಜ. ಆದರೆ ಭಾರತದ ದೃಷ್ಟಿಯಲ್ಲಿ ಅವರೇನೂ ಚಿಂತನೆ ನಡೆಸಿದಂತಿಲ್ಲ. ...
ಕಾಮನ್ವೆಲ್ತ್ ಮತ್ತು ಏಷ್ಯನ್ ಕ್ರೀಡಾಕೂಟದಲ್ಲಿ ಭಾರತೀಯ ಅಥ್ಲೀಟ್ ಗಳು ಹಲವಾರು ಪದಕಗಳನ್ನು ಗೆದ್ದಾಗ ದೇಶದ ಕ್ರೀಡಾ ವಲಯದಲ್ಲಿಯೇ ಸಂಭ್ರಮ. ಭಾರತೀಯ ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ಹೊಸ ಭರವಸೆಗಳು ಹುಟ್ಟಿಕೊಂಡವು ಎಂಬ ಅದಮ್ಯ ವಿಶ್ವಾಸ. ಮುಂಬರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತ ಅಮೋಘ ಸಾಧನೆ ಮಾಡುತ್ತದೆ ಎಂಬ ಕೋಟಿ ಭರವಸೆ ಎಲ್ಲರಲ್ಲೂ ಮನೆ ಮಾಡಿತ್ತು. ಆದರೆ ಈಗ ಬಂದಿರುವ ಫಲಿತಾಂಶ ಮಾತ್ರ ಇವೆಲ್ಲವನ್ನೂ ಸುಟ್ಟು ಹಾಕಿದೆ. ಅಶ್ವಿನಿ ಅಕ್ಕುಂಜಿ, ಮನ್ ದೀಪ್ ಕೌರ್, ಸಿನಿ ಜೋಸ್, ಜುವಾನಾ ಮರ್ಮು, ಟಿಯಾನಾ ಮೇರಿ ಥಾಮಸ್, ಸೋನಿಯಾ, ಹರಿಕೃಷ್ಛಮುರಳೀಧರನ್, ಪ್ರಿಯಾಂಕಾ ಪನ್ವಾರ್ ಮೊದಲಾದ ಅಥ್ಲೀಟ್ ಗಳುನಿಷೇಧಿತ ಅನಬಾಲಿಕ್ ಸ್ಟಿರಾಯಿಡ್ ಮಿಥಾಂಡಿನನ್ ಸೇವಿಸಿದ್ದು ಖಾತ್ರಿಯಾದ ಕಾರಣ ನಿಷೇಧಕ್ಕೊಳಗಾದರು. ಮೊನ್ನೆ ಮೊನ್ನೆಯಷ್ಟೇ 19 ಕಬಡ್ಡಿ ಆಟಗಾರರು ಬಿ ಸ್ಯಾಂಪಲ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ವಿಶ್ವ ಕಬಡ್ಡಿಯಲ್ಲಿ ತನ್ನ ಪ್ರಾಬಲ್ಯ ಮೆರೆದಿದ್ದ ಭಾರತೀಯ ಕಬಡ್ಡಿ ತಂಡಕ್ಕೆ ಈಗ ಅಲ್ಲಿಯೂ ಕತ್ತಲೆ! ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಆಕಾಂಕ್ಷೆ ಇಟ್ಟುಕೊಂಡಿರುವಂಥ ಹಲವಾರು ಭಾರತೀ ಕ್ರೀಡಾಳುಗಳು ಉದ್ದೀಪನ ಮದ್ದು ಸೇವನೆಯ ಸುಳಿಯಲ್ಲಿ ಸಿಲುಕುತ್ತಿದ್ದಾರೆ. ರಾಷ್ಟ್ರ ಮಟ್ಟದವರೆಗೂ ಯಾವುದೇ ಸಮಸ್ಯೆ ಎದುರಿಸದೇ ಇದ್ದವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮಸ್ಯೆಗಳ ಸರಣಿಯೇ ಎದುರಾಗುತ್ತದೆ. ತಾನು ಉದ್ದೀಪನ ಮದ್ದು ಸೇವಿ...
ಕರ್ನಾಟಕ ಆಡಳಿತಾತ್ಮಕ ಸೇವಾ(ಕೆಎಎಸ್) ಪರೀಕ್ಷೆಯ ಪಠ್ಯ ಬದಲಾಗುತ್ತಿದೆ. ಅಂದರೆ ಅದು ಭಾರತೀಯ ಆಡಳಿತಾತ್ಮಕ ಸೇವಾ (ಐಎಎಸ್) ಪರಿಕ್ಷೆಯ ಮಟ್ಟಕ್ಕೆ ಬರುತ್ತಿದೆ. ಆದರೆ ಐಎಎಸ್, ಕೆಎಎಸ್... ಮುಂತಾದಕ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಹೆಚ್ಚಿನವರಲ್ಲಿ ಅಳುಕಿದೆ. ಹೇಗೆ ಎದುರಿಸುವುದು ಎಂಬ ಗೊಂದಲದಲ್ಲಿದೆ ಯುವ ಸಮಾಜ. ಇಂತಿರುವಾಗ ಕೆಎಎಸ್ ಕೂಡಾ ಐಎಎಸ್ ಮಟ್ಟದ ಪಠ್ಯ ಹೊಂದಿದರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ನಿರ್ಧರಿಸುವ ಅಭ್ಯರ್ಥಿಗಳು ಯಾವ ರೀತಿಯ ಸಿದ್ಧತೆ ನಡೆಸಬೇಕು? ಸ್ಪರ್ಧಾತ್ಮಕ ಪರೀಕ್ಷೆಗಳ ಬಗೆಗಿನ ಅಳುಕನ್ನು ಅಭ್ಯರ್ಥಿಗಳ ಮನಸ್ಸಿನಿಂದ ತೆಗೆದು ಹಾಕುವ ಬಗೆ ಹೇಗೆ? ಇವೇ ಮುಂತಾದ ವಿಚಾರಗಳ ಬಗ್ಗೆ ಬೆಂಗಳೂರಿನ ವಿಜಯನಗರದ ಎಂ ಸಿ ಬಡಾವಣೆಯಲ್ಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರತಿಷ್ಠಿತ ತರಬೇತಿ ಕೇಂದ್ರ ಆಸ್ಪೈರ್ ಸ್ಟಡಿ ಸೆಂಟರ್ನ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್ ದಡ್ಡೆ ಅವರನ್ನು `ಕನ್ನಡಪ್ರಭ' ಮಾತಾಡಿಸಿತು.
ಶಿವಶಂಕರ್ ದಡ್ಡೆ
- ಕೆಎಎಸ್ ಪಠ್ಯ ಯಾವಾಗಿಂದ ಬದಲಾಗುತ್ತಿದೆ? ಮುಂದಿನ ನೋಟಿಫಿಕೇಶನ್, ಅಂದರೆ ಪ್ರಿಲಿಮಿನರಿ ಪರೀಕ್ಷೆಗೆ ಸೇರ್ಪಡೆಯಾಗುವ ಮುಂದಿನ ಬ್ಯಾಚ್ನ ಅಭ್ಯರ್ಥಿಗಳಿಗೆ ಹೊಸ ಪಠ್ಯ ಇರುವ ಸಾಧ್ಯತೆಗಳಿವೆ. ಈಗಾಗಲೇ ಹೊಸ ಪಠ್ಯ ಸಿದ್ಧವಾಗಿದೆ. ಆ ಪಠ್ಯ ಜಾರಿಯಾಗುವುದಷ್ಟೇ ಬಾಕಿ. ಸುಮಾರು 200 ಹುದ್ದೆಗಳಿಗೆ ಸರಕಾರ ಈಗಾಗಲೇ ಅನುಮತಿ ಕೊಟ್ಟಿದೆ. ಈ ತಿಂಗ...
ಅವರ ಇಂತಹ ಸಾವಿರಾರು ಪೋಸ್ಗಳು ಚಿರಪರಿಚಿತ
ReplyDelete